ಭಾರತದ ರಾಷ್ಟ್ರೀಯ ಹಬ್ಬಗಳ ಕುರಿತು ಪ್ರಬಂಧ 2023 / Essay on National festival in Kannada

ಭಾರತದ ರಾಷ್ಟ್ರೀಯ ಹಬ್ಬಗಳ ಕುರಿತು ಪ್ರಬಂಧ / Essay on national festival in Kannada

ಭಾರತದ ರಾಷ್ಟ್ರೀಯ ಹಬ್ಬಗಳ ಕುರಿತು ಪ್ರಬಂಧ

ನಮ್ಮ ಭಾರತವು ಜಾತ್ಯತೀತ ದೇಶವಾಗಿದೆ ಇಲ್ಲಿ ಎಲ್ಲಾ  ಹಬ್ಬಗಳನ್ನು ಎಲ್ಲಾ ಜಾತಿ ಮತ್ತು ಧರ್ಮದ ಜನರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ ರಾಕಿ ದೀಪಾವಳಿ ದಸರಾ ಈದ್ ಗೌರಿ ಗಣೇಶ ಕ್ರಿಸ್ಮಸ್ ಹೀಗೆ ಅನೇಕ ಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ ಭಾರತದಲ್ಲಿ ಹಬ್ಬಗಳಿಗೆ ಕೊರತೆ ಇಲ್ಲ ಪ್ರತಿಯೊಬ್ಬರಿಗೂ ಅವರ ಧರ್ಮ ಮತ್ತು ಜಾತಿಗೆ ಅನುಗುಣವಾಗಿ ವಿಭಿನ್ನ ರೀತಿಯ ಹಬ್ಬಗಳನ್ನು ಆಚರಿಸುತ್ತಾರೆ ಇನ್ನೂ ಕೆಲವು ಹಬ್ಬಗಳಿವೆ ಅವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಗೆ ಒಳಪಡುವುದಿಲ್ಲ ಮತ್ತು ಪ್ರತಿಯೊಬ್ಬ ಭಾರತೀಯ ಪ್ರಜೆ ಸಂಭ್ರಮದಿಂದ ಆಚರಿಸುವ ಹಬ್ಬಗಳಾಗಿವೆ ಅವೇ ನಮ್ಮ ರಾಷ್ಟ್ರೀಯ ಹಬ್ಬಗಳು.

ಪರಿವಿಡಿ
 ಭಾರತೀಯ ರಾಷ್ಟ್ರೀಯ ಹಬ್ಬಗಳು
1.1. ಸ್ವಾತಂತ್ರ್ಯ ದಿನ
1.2. ಗಣರಾಜ್ಯ ದಿನ
1.3. ಗಾಂಧಿ ಜಯಂತಿ
1.4. ರಾಷ್ಟ್ರೀಯ ಹಬ್ಬಗಳಲ್ಲಿ ಭಾರತೀಯರು ಏನು ಮಾಡುತ್ತಾರೆ

 ಭಾರತೀಯ ರಾಷ್ಟ್ರೀಯ ಹಬ್ಬಗಳು

1947ರಿಂದ, ಅಂದರೆ ದೇಶಕ್ಕೆ ಸ್ವತಂತ್ರ ಬಂದ ನಂತರ ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿವೆ, ಅಂದಿನಿಂದ ಇಂದಿನವರೆಗೆ ನಾವು ಅವುಗಳನ್ನು ಅತ್ಯಂತ ಸಂಭ್ರಮದಿಂದ  ಆಚರಿಸುತ್ತಾ ಬಂದಿದ್ದೇವೆ.  ಈ ಹಬ್ಬಗಳು ನಮ್ಮ ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುತ್ತವೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು ಕೆಳಗಿನಂತಿವೆ. 

ಕ್ರಮ ಸಂಖ್ಯೆರಾಷ್ಟ್ರೀಯ ಹಬ್ಬದ ಹೆಸರುರಾಷ್ಟ್ರೀಯ ಹಬ್ಬದ ದಿನಾಂಕ
1ಸ್ವಾತಂತ್ರ ದಿನಾಚರಣೆಆಗಸ್ಟ್ 15
2ಗಣರಾಜ್ಯೋತ್ಸವಜನವರಿ 26
3ಗಾಂಧಿ ಜಯಂತಿ  ಅಕ್ಟೋಬರ್ 2

ಇವು ನಮ್ಮ ರಾಷ್ಟ್ರೀಯ ಹಬ್ಬಗಳಾಗಿದ್ದು, ಇದಲ್ಲದೆ ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆಗಳು ಕೂಡ ರಾಷ್ಟ್ರೀಯ ರಜಾ ದಿನಗಳಾಗಿವೆ. ಅವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ ಹೋರಾಟಗಾರರ ಸ್ವರ್ಣಾರ್ಥಕವಾಗಿ ಆಚರಿಸಲಾಗುತ್ತದೆ. ಇದಲ್ಲದೆ ಈ ವಿಶೇಷ ದಿನದಂದು ಮಹಾನ್ ಸ್ವಾತಂತ್ರ  ಹೋರಾಟಗಾರರಾದ ಸರ್ದಾರ್ ವಲ್ಲಭಾಯಿ ಪಟೇಲ್, ಭಗತ್ ಸಿಂಗ್, ಡಾ. ಅಂಬೇಡ್ಕರ್ ಮುಂತಾದ ನಾಯಕರುಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಈ ಹಬ್ಬಗಳು ದೇಶಕ್ಕೆ ಪ್ರೀತಿ ಮತ್ತು ಏಕತೆಯ ಸಂದೇಶವನ್ನು ನೀಡುತ್ತವೆ. ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಆದ್ದರಿಂದ ಇವು ಇತರ ಹಬ್ಬಗಳಿಗಿಂತ ವಿಶೇಷವಾಗಿರುತ್ತದೆ. ಈ ಹಬ್ಬಗಳನ್ನು ಆಚರಿಸಲು ಸರ್ಕಾರ ವಿಶೇಷ ಸಿದ್ಧತೆಗಳನ್ನು ಮಾಡುತ್ತದೆ. ಇಡಿ ದೇಶವು ನವ ವಧುವಿನಂತೆ ಅಲಂಕರಿಸಲ್ಪಡುತ್ತದೆ,ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಸಲಾಗುತ್ತದೆ.

ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ  ನಮ್ಮ ದೇಶದಲ್ಲಿ ಅತ್ಯುನ್ನತ ಸ್ಥಾನ ಸಿಗುತ್ತದೆ.ಈ ವಿಶೇಷ ದಿನದಂದು ಪ್ರತಿ ರಾಜ್ಯ,ಪ್ರತಿ ಜಿಲ್ಲೆ ಯ  ಮತ್ತು ಪ್ರತಿಯೊಂದು ಸರ್ಕಾರಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳು ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮತ್ತು ಎಲ್ಲೆಡೆ ಏಕರೂಪವಾಗಿ  ಈ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಭಾರತದ ರಾಜಧಾನಿ ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮ್ಮ ದೇಶದ ಮಿಲಿಟರಿ ಶಕ್ತಿಯನ್ನು ಸಹ ಪ್ರದರ್ಶಿಸಲಾಗುತ್ತದೆ. ಈ ದಿನದಂದು ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ, ಇದರಲ್ಲಿ ದೇಶಕ್ಕಾಗಿ ಅದ್ಭುತ ಕೆಲಸ ಮಾಡಿದವರನ್ನು ಗೌರವಿಸಲಾಗುತ್ತದೆ. ಈ ದಿನದಂದು ದೇಶದ ಜನರು ಸಂದೇಶಗಳು ಮತ್ತು ಕಾರ್ಡ್ ಗಳನ್ನು ನೀಡುವ ಮೂಲಕ ಪರಸ್ಪರ ಅಭಿನಂದಿಸುತ್ತಾರೆ.

 ಸ್ವಾತಂತ್ರ್ಯ ದಿನ

1947 ರಲ್ಲಿ,  200 ವರ್ಷಗಳ ನಂತರ ಬ್ರಿಟಿಷ್ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಾವು ಪ್ರತಿ ವರ್ಷ ಆಗಸ್ಟ್ 15  ಅನ್ನು ಸ್ವಾತಂತ್ರ ದಿನವನ್ನಾಗಿ ಆಚರಿಸುತ್ತೇವೆ. ಮತ್ತು ಅತಿ ಹೆಚ್ಚಿನ ಸಂಭ್ರಮದೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಸಡಗರ  ಮತ್ತು ಸಂಭ್ರಮದ ದಿನವಾಗಿದೆ. ಈ ದಿನದಂದು ಪ್ರತಿಯೊಬ್ಬರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರನ್ನು ಸ್ಮರಿಸುತ್ತಾರೆ, ಪ್ರತಿಯೊಬ್ಬರು ಅವರಿಗೆ ಗೌರವ ಸಲ್ಲಿಸುತ್ತಾರೆ. ಈ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ದೊಡ್ಡ ನಾಯಕರು ನಮ್ಮ ದೇಶದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಒಂದಲ್ಲ ಒಂದು ಜಿಲ್ಲೆಯಲ್ಲಿ ಹಾರಿಸುತ್ತಾರೆ. ಕೆಂಪುಕೋಟೆಯಿಂದ ದೇಶದ ಹೆಸರಿನಲ್ಲಿ ಪ್ರಧಾನಿ ಭಾಷಣವನ್ನು ಮಾಡುತ್ತಾರೆ. ದೇಶದ ಅಭಿವೃದ್ಧಿ ಮತ್ತು ಭವಿಷ್ಯದ ಹೊಸ ಯೋಜನೆಗಳ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಧ್ವಜಾರೋಹಣದ ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.ಮತ್ತು ದೇಶದ ಸೇನೆಗೆ ಪ್ರಧಾನಿ ನಮನ ಸಲ್ಲಿಸುತ್ತಾರೆ.

ಈ ದಿನದ ಸಿದ್ಧತೆಗಳು ಶಾಲಾ-ಕಾಲೇಜುಗಳಲ್ಲಿ ಮುಂಚಿತವಾಗಿಯೇ ಪ್ರಾರಂಭವಾಗುತ್ತದೆ. ಈ ದಿನವನ್ನು ಭಾಷಣ ಹಾಡು ನೃತ್ಯಗಳೊಂದಿಗೆ ಆಚರಿಸಲಾಗುತ್ತದೆ. ಬಳಿಕ ಬಹುಮಾನ ವಿತರಣೆಯು ನಡೆಯುತ್ತದೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲದೆ, ಜಿಲ್ಲೆಯಾದ್ಯಂತ ಇದನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಅಲ್ಲಿ ಎಲ್ಲಾ ಶಾಲಾ ಕಾಲೇಜು ಮಕ್ಕಳು ಭಾಗವಹಿಸುತ್ತಾರೆ. ಇಲ್ಲಿ ನೃತ್ಯ, ಪರೇಡ್, ಮೆರವಣಿಗೆ, ಭಾಷಣ, ಗಾಯನ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಇದರೊಂದಿಗೆ ಈ ದಿನಕ್ಕೆ ಕೆಲವು ದಿನಗಳ ಮೊದಲು ವಿವಿಧ ಆಟಗಳು, ಚರ್ಚೆಗಳು, ಮುಖವರಣಿಕೆ ಮುಂತಾದ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳು ದೇಶದ ನಾಗರೀಕರ ಏಕತೆಯನ್ನು ಬಲಪಡಿಸುತ್ತವೆ. ಈ ದಿನ ಟಿವಿ ರೇಡಿಯೋಗಳಲ್ಲಿ ಸ್ವಾತಂತ್ರ ದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಬರುತ್ತವೆ.

 ಗಣರಾಜ್ಯ ದಿನ

 ಜನವರಿ 26 1950 ರಂದು,   ಸ್ವತಂತ್ರ ಭಾರತದ ಸಂವಿಧಾನವು ಜಾರಿಗೆ ಬಂದಿತು. ಅಂದಿನಿಂದ ಪ್ರತಿ ವರ್ಷ ನಾವು ಜನವರಿ 26ರಂದು ಗಣರಾಜ್ಯ ದಿನವನ್ನಾಗಿ ಆಚರಿಸುತ್ತೇವೆ. ಈ ದಿನದಂದು ಪ್ರಧಾನಿಯವರು ಇಂಡಿಯಾ ಗೇಟ್ ನಲ್ಲಿ ದೇಶದ ಎಲ್ಲಾ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಈ ದಿನವೂ ಭಾರತದ ಪ್ರತಿಯೊಬ್ಬ ನಾಗರೀಕನ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನ ಭಾರತವು ಸಂಪೂರ್ಣ ಗಣರಾಜ್ಯವಾಯಿತು. ದೇಶವು ತನ್ನದೇ ಆದ ಸರ್ಕಾರವನ್ನು ನಡೆಸುವ ಹಕ್ಕನ್ನು ಪಡೆದುಕೊಂಡಿತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ ದಿನಾಚರಣೆ ರೀತಿಯಲ್ಲಿ ಎಲ್ಲಾ ಕಡೆ ಧ್ವಜಾರೋಹಣ ಮಾಡಲಾಗುತ್ತದೆ. ನಂತರ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.  ಮತ್ತು ಭಾಷಣ ಮಾಡಲಾಗುತ್ತದೆ. ದೆಹಲಿಯ ರಾಜಪತನದಲ್ಲಿ ಇದಕ್ಕಾಗಿ ವಿಶೇಷ ಸಿದ್ಧತೆ ಮಾಡಲಾಗುತ್ತದೆ. ದೆಹಲಿಯ ಶಾಲಾ ಮಕ್ಕಳಿಂದ ವಿಶೇಷ ಜಾನಪದ ನೃತ್ಯವನ್ನು ಆಯೋಜಿಸಲಾಗುತ್ತದೆ. ಈ ದಿನ ವಿದೇಶದ ನಾಯಕರನ್ನು ಭಾರತದಲ್ಲಿ ಅತಿಥಿಯಾಗಿ ಕರೆಯುತ್ತಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ  ಯು ಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು 2015ರಲ್ಲಿ ಅವರ ಮೊದಲ ಗಣರಾಜ್ಯೋತ್ಸವದಂದು ಕರೆಯಲಾಯಿತು. ಈ ಕಾರ್ಯಕ್ರಮವು ರಾಜ್ಯಪಟದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತದೆ.

 ಈ ದಿನದಂದು ಶೌರ್ಯ ಪ್ರಶಸ್ತಿಯನ್ನು ವಿತರಿಸಲಾಗುತ್ತದೆ ಜೊತೆಗೆ ಪದ್ಮಭೂಷಣ ಪದ್ಮವಿಭೂಷಣ ಭಾರತ ರತ್ನದಂತಹ ವಿಶೇಷ ಗೌರವಗಳನ್ನು ನೀಡಲಾಗುತ್ತದೆ. ಈ ಹಬ್ಬವನ್ನು ದೇಶದ ಪ್ರತಿಯೊಂದು ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ ಅಲ್ಲಿಯೂ ಸಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆಯಾ ರಾಜ್ಯಗಳಲ್ಲಿ ರಾಜ್ಯಪಾಲರು ಸೇನಾಪರೇಡಿಗೆ ಸೆಲ್ಯೂಟ್ ಮಾಡುತ್ತಾರೆ.

 ಗಾಂಧಿ ಜಯಂತಿ

 ನಮ್ಮ ದೇಶದ ಪಿತಾಮಹ ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜನ್ಮದಿನವನ್ನು ಅಕ್ಟೋಬರ್ 2ರಂದು ಗಾಂಧಿ ಜಯಂತಿ ಎಂದು ಭಾರತಾದ್ಯಂತ ಆಚರಿಸಲಾಗುತ್ತದೆ. ಹುತಾತ್ಮ ಗಾಂಧೀಜಿಯವರು ತಮ್ಮ ಕಠಿಣ ಪರಿಶ್ರಮದಿಂದ ಭಾರತ ದೇಶಕ್ಕೆ ಸ್ವಾತಂತ್ರ ನೀಡಿದರು. ಅಹಿಂಸಾ ವಾದಿ ಗಾಂಧೀಜಿಯವರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದರಾಗಿದ್ದರು, ಅವರು ಕೇವಲ ದೇಶದ ಸ್ವಾತಂತ್ರವನ್ನು ಪ್ರೀತಿಸುತ್ತಿದ್ದರು. ರಾಷ್ಟ್ರೀಯ ಹಬ್ಬದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ ಈ ದಿನವನ್ನು ಸ್ವಾತಂತ್ರ ದಿನ ಮತ್ತು ಗಣರಾಜ್ಯೋತ್ಸವ ದಿನದ ರೀತಿ ವಿಜೃಂಭಣೆಯಿಂದ ಆಚರಿಸುವುದಿಲ್ಲ. ಆದರೆ ಈ ದಿನ ಪ್ರತಿಯೊಬ್ಬ ಭಾರತೀಯನಿಗೆ ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ. ಗಾಂಧೀಜಿ ಸದಾ ಸತ್ಯಗ್ರಹ ಮತ್ತು ಅಹಿಂಸೆಯೊಂದಿಗೆ ನಿಂತವರು. ತಮ್ಮ ಮೌಲ್ಯಗಳನ್ನು ಅನುಸರಿಸಿ ದೇಶಕ್ಕೆ ಸ್ವತಂತ್ರವನ್ನು ನೀಡಿದ್ದರು. ಈ ದಿನ ಸರ್ಕಾರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅವರ ಬಗ್ಗೆ ಭಾಷಣಗಳನ್ನು ಆಯೋಜಿಸಲಾಗುತ್ತದೆ.

 ಈ ದಿನದಂದು ಪ್ರಧಾನಿ, ರಾಷ್ಟ್ರಪತಿ ಮತ್ತು ದೇಶದ ಪ್ರತಿಯೊಬ್ಬ ಪ್ರಮುಖ ನಾಯಕರು ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜಘಾಟ್ಗೆ ಹೋಗಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸುತ್ತಾರೆ. ಇಲ್ಲಿ ವಿಶೇಷ ಪ್ರಾರ್ಥನಾ ಸಭೆಯನ್ನು ಸಹ ಆಯೋಜಿಸಲಾಗುತ್ತದೆ. ಇದರೊಂದಿಗೆ ಗಾಂಧೀಜಿಯವರ ಜೀವನಾಧಾರಿತ ಭಾಷಣ, ಚರ್ಚಾ ಸ್ಪರ್ಧೆ, ಚಿತ್ರಕಲೆ, ಪ್ರಬಂಧ, ಸೃಜನಶೀಲ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇದರೊಂದಿಗೆ ಮಕ್ಕಳು ಗಾಂಧೀಜಿಯನ್ನು ಹೆಚ್ಚು ಹತ್ತಿರದಿಂದ ತಿಳಿದುಕೊಳ್ಳಲು ಸಹಾಯವಾಗುತ್ತದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿಯಂದು ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು.

 ಮೇಲೆ ತಿಳಿಸಿದ ದಿನಗಳನ್ನು ಹೊರತುಪಡಿಸಿ ಲಾಲಾ ಲಜ್ಪತ್ ರಾಯ್, ರಾಣಿ ಲಕ್ಷ್ಮೀಬಾಯಿ, ಸುಭಾಷ್ ಚಂದ್ರ ಬೋಸ್ ಮುಂತಾದ ಇನ್ನು ಕೆಲವು ಸ್ಮರಣೀಯ ದಿನಗಳಿವೆ. ಇವರೆಲ್ಲರೂ ನಮ್ಮ ದೇಶದ ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರು, ದೇಶವನ್ನು ಸ್ವತಂತ್ರಗೊಳಿಸುವುದು ತನ್ನ ಆದ್ಯ ಕರ್ತವ್ಯವೆಂದು ಪರಿಗಣಿಸಿದವರು, ಈ ಎಲ್ಲಾ ದಿನಗಳನ್ನು ಸಣ್ಣ ರೀತಿಯಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯವಾಗಿ ಈ ಹಬ್ಬಗಳು ನಮ್ಮ ದೇಶವನ್ನು ಒಗ್ಗೂಡಿಸುತ್ತವೆ. ಇಲ್ಲಿ ಯಾವುದೇ ಜಾ,ತಿ ಧರ್ಮ, ಸಮಾಜವು ಈ ಹಬ್ಬಗಳನ್ನು ಆಚರಿಸದಂತೆ ಒತ್ತಾಯಿಸುವುದಿಲ್ಲ.

 ರಾಷ್ಟ್ರೀಯ ಹಬ್ಬಗಳನ್ನು ಭಾರತೀಯರು ಹೇಗೆ ಆಚರಿಸುತ್ತಾರೆ

  •  ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  •  ಈ ದಿನ ವಿದ್ಯಾರ್ಥಿಗಳು . ದೇಶಭಕ್ತಿಯ ನಾಟಕಗಳನ್ನು ಪ್ರದರ್ಶಿಸುತ್ತಾರೆ.
  •  ಕೆಲವು ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. 
  • ದಿನದಂದು ದೇಶದ ವೀರ ಸೈನಿಕರು ಮತ್ತು ದೇಶದ ಹಿತಕ್ಕೋಸ್ಕರ ಕೆಲಸ ಮಾಡುವ ಜನರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
  •  ಈ ದಿನಗಳಂದು ಭಾರತೀಯರು ದೇಶಭಕ್ತಿ ಗೀತೆಗಳನ್ನು ಹಾಡುತ್ತಾರೆ ಮತ್ತು ದೇಶಭಕ್ತರನ್ನು ಹೊಗಳುತ್ತಾರೆ.
  •  ಬಾಪೂಜಿ ಅವರ  ಜೀವನ ಚರಿತ್ರೆಯನ್ನು ಗಾಂಧಿ ಜಯಂತಿ  ದಿನ  ಹೇಳಲಾಗುತ್ತದೆ, ಮತ್ತು ಅವರು ಭಾರತಕ್ಕಾಗಿ ಏನು ಮಾಡಿದರು ಎಂದು ತಿಳಿಸಲಾಗುತ್ತದೆ.
  •  ರಾಷ್ಟ್ರೀಯ ಹಬ್ಬಗಳು ರಾಷ್ಟ್ರೀಯ ರಜಾ ದಿನಗಳಾಗಿದ್ದರು ರಾಷ್ಟ್ರೀಯ   ಹಬ್ಬಗಳೆಂದು ಶಾಲೆಗಳು ಮತ್ತು ಕಚೇರಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Leave a Comment